WEL COME TO KANAKAGIRI UTSAV 2013

ಶನಿವಾರ, ಫೆಬ್ರವರಿ 20, 2010

ಕನಕಗಿರಿಯ ಚಿತ್ರಗಳು

ಕನಕಗಿರಿಯ ಇತಿಹಾಸ

ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಸ್ಮರಣೀಯವಾದದು. ದಕ್ಷಿಣದಿಂದ ದಂಡೆತ್ತಿ ಬರುತ್ತಿದ್ದ ಮುಸ್ಲಿಮರ ದಾಳಿಂದ ತತ್ತರಿಸಿದ್ದ ಹಿಂದೂ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿತಲ್ಲದೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ಸಾಮ್ರಾಜ್ಯವಾಳಿ `ಸುವರ್ಣಯುಗ'ವೆಂದು ಕರೆಸಿಕೊಂಡ ಕೀರ್ತಿ ವಿಜಯನಗರಕ್ಕೆ ಸಲ್ಲುತ್ತದೆ.ಇಂಥ ಮಹತ್ವದ ಯುಗದಲ್ಲಿ ಬೆಳಕಿಗೆ ಬಂದ ಶಿಲ್ಪ ಸಂಪತ್ತಿನ ಕಲಾ ಕಣಜ ಕನಕಗಿರಿ.
`ನಡೆದು ನೋಡಲು ಹೋಗು ಹಂಪಿ ಸಿರಿ
ಮನತಣಿದು ನೋಡಲು ಬಾ ಕನಕಗಿರಿ'
ಎಂಬ ಕವಿಯ ಸಾಲುಗಳು ಅಕ್ಷರಶ: ಸತ್ಯ ಎಂದು ಕನಕಗಿರಿಯನ್ನು ನೋಡಿದ ಹೃದಯವಂತ ಪ್ರವಾಸಿಗರಿಗೆ ಅನಿಸದೆ ಇರದು. ಕನಕಗಿರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸೇರಿದ ಒಂದು ಐತಿಹಾಸಿಕ ಪ್ರವಾಸಿ ತಾಣ. ಜಿಲ್ಲಾ ಕೇಂದ್ರ ಸ್ಥಾನದಿಂದ ೪೮ ಕಿ.ಮಿ, ತಾಲೂಕು ಕೇಂದ್ರ ಸ್ಥಾನದಿಂದ ೨೨ ಕಿ.ಮಿ ಹಾಗೂ ಜಗತ್ಪ್ರಸಿದ್ದ ಹಂಪೆಂದ ೨೦ ಮೈಲಿಗಳ ದೂರದಲ್ಲಿ ಶಿಲ್ಪ ಸಂದೌರ್ಯದ ಈ ರಮ್ಯ ತಾಣವಿದೆ.
ಕನಕಗಿರಿ ಹೆಸರಿನ ಹಿಂದಿನ ಮರ್ಮ:
ದಂತಕಥೆಗಳಲ್ಲಿ ಹೆಸರಿಸಲಾದ ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶದವು ಪುಷ್ಪ ಮತ್ತು ಜಯಂತಿ ಎಂಬ ನದಿಗಳೆರಡರ ಸಂಗಮದ ತಾಣವಾಗಿತ್ತು ಮತ್ತು ಈ ಪ್ರದೇಶವು ದಟ್ಟವಾದ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ `ಕನಕಮುನಿ'ಇಲ್ಲಿ ತಪಸ್ಸು ಗೈದು ಕೆಲ ಕ್ಷಣ ಕನಕವೃಷ್ಟಿ ಅಂದರೆ ಚಿನ್ನದ ಮಳೆ ತರಿಸಿದ ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾತು ಎಂದು ಹೇಳಲಾಗುತ್ತಿದೆ.
ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳದ ಮಹಿಮೆಯನ್ನು ಹಾಗೂ ದೇವರ ಚರಿತೆಯನ್ನು ವರ್ಣಿಸಲಾಗಿದೆ ಅಲ್ಲದೆ ಈ ಪುರಾಣದಲ್ಲಿ ಕನಕಗಿರಿಯನ್ನು `ಸುವರ್ಣಗಿರಿ' ಎಂದು ಕರೆಯಲಾಗಿದೆ. ಹಂಪೆಂದ ೨೦ ಮೈಲುಗಳ ದೂರದಲ್ಲಿ `ಸುವರ್ಣಗಿರಿ' ಅಂದರೆ ಕನಕಗಿರಿ ಇರುವುದಾಗಿ ಹೇಳಿದ್ದು ಅಲ್ಲಿ ಹೇಳಲಾಗಿರುವ ಭೌಗೋಳಿಕ ಅಂಶಗಳೆಲ್ಲ ಸತ್ಯವಾಗಿವೆ. ಕನಕಗಿರಿ ಹಾಗೂ ಇಲ್ಲಿರುವ ಇತಿಹಾಸಿದ ಕುರಿತು ಹಲವಾರು ಇತಿಹಾಸ ತಜ್ಷರು ರೋಚಕದ ಅಂಶಗಳನ್ನು ಹೊರಗೆಡಿಹಿದ್ದಾರೆ. ಶಾಸನಗಳಿಂದ ಸಂಗ್ರಹಿಸಲ್ಪಟ್ಟ ಹಲವು ವಿಷಯಗಳು ಕನಕಗಿಯ ಇತಿಹಾಸವನ್ನು ಹೇಳುತ್ತಿವೆ.
ಕ್ರಿಸ್ತಯುಗದ ಪ್ರಾರಂಭದಲ್ಲಿ ಟಾಲೆವಿಯನೆಂಬ ವಿದೇಶಿಯನು ತನ್ನ ಪ್ರವಾಸಕಥನದಲ್ಲಿ `ಕಲಿಗೇರಿಯಸ್' (ಕನಕಗಿರಿ) ಮತ್ತು `ಮೊದಗಾಲ್' (ಮುದಗಲ್) ವ್ಯಾಪಾರದ ಕೇಂದ್ರಗಳಾಗಿದ್ದವು ಎಂದು ಹೇಳಿದ್ದಾನೆ.
ಶ್ರೀಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯ:
ಚಿನ್ನದ ಮಳೆಯ ನಂತರದ ವರ್ಷಗಳಲ್ಲಿ ಕಾಲಕ್ರಮೇಣ ಪಕ್ರೃತಿಯ ವಿಕೋಪಕ್ಕೆ ದಟ್ಟವಾದ ಕಾಡಿನ ನದಿ ತಟದಲ್ಲಿದ್ದ ಜಯಂತ ನರಸಿಂಹ ಲಿಂಗಾಕಾರದ ಸಾಲಿಗ್ರಾಮವು ಮಣ್ಣೊಳಗೆ ಹೂತು ಹೋಗಿದ್ದಾಗಿ ಹೇಳಲಾಗುತ್ತಿದೆ. ಅಲ್ಲದೆ ತದ ನಂತರದಲ್ಲಿ ಗುಜ್ಜಲವಂಶದ ಪರಸಪ್ಪ ಈ ಪ್ರದೇಶಕ್ಕೆ ಬಂದು ಇಲ್ಲೆ ನೆಲೆಸಿದ್ದನು. ಒಮ್ಮೆ ಹಾಲು ಕೊಡುವ ಹಸುವೊಂದು ಹುತ್ತಕ್ಕೆ ಹಾಲುಗರೆಯುವುದನ್ನು ಕಂಡರು.ಇದರಿಂದ ಆಶ್ಚರ್ಯನಾದ ಪರಸಪ್ಪ ಉಡಚಿನಾಯಕ ಹುತ್ತವನ್ನು ಕೀಳಿಸಿದನು. ಹುತ್ತ ಕೀಳುವ ಹಾಳು ಮೂರ್ಛೆ ಹೋದರು.ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಬಂದ ವೆಂಕಟರಮಣ ಸತ್ಯಾಂಶವನ್ನು ತಿಳಿಸಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿದನು. ವಿಜಯನಗರ ಅರಸ ಪ್ರೌಢ ದೇವರಾಯನಿಗೆ ವೆಂಕಟರಮಣನ ದರ್ಶನದ ಕುರಿತು ತಿಳಿಸಿ ಅವರ ಸಹಾಯದಿಂದ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು,ಮತ್ತು ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಸರ್ವ ಜಾತಿ, ಧರ್ಮವನ್ನು ತೊಡೆದು ಸರ್ವರಿಗೂ ದರ್ಶನಕ್ಕೆ ಮುಕ್ತವಾಗಿರುವ ಕನಕಗಿರಿಯನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತಿದೆ. ಜಾತ್ರೋತ್ಸವ ಮುನ್ನ ೯ ದಿನಗಳ ಕಾಲ ತಿರುಪತಿಯಲ್ಲಿ ನಡೆಯುವಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಉತ್ಸವಗಳನ್ನು ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ನಡೆಸಲಾಗುತ್ತದೆ.
ವೆಂಕಟಾಪತಿ ಭಾವಿ:
ವೆಂಕಟಾಪತಿ ಭಾವಯಿಂದ ಮಾರುದೂರದಲ್ಲಿರುವ ಪುಷ್ಕರಣಿಯು ತಿರುಪತಿಯಲ್ಲಿರುವ ಪುಷ್ಕರಣಿಯನ್ನು ನೆನಪಿಗೆ ತರುತ್ತದೆ. ಪೂರ್ವದಂತೆ ಪಶ್ಚಿಮ ದಿಕ್ಕಿನಲ್ಲೂ ಮತ್ತೊಂದು ಪುಷ್ಕರಣಿ ಇದ್ದು ಇವು ಉಡಚಿನಾಯಕನ ಮಗನಾದ ಕನಕಯ್ಯ ಉಡಚಿನಾಯಕ ಕಟ್ಟಿಸಿದನೆಂದು ಹೇಳಲಾಗುತ್ತಿದೆ. ಕನಕಗಿರಿಯಲ್ಲಿ ೭೦೧ ದೇವಾಲಯಗಳು, ೭೦೧ ಭಾವಿಗಳು ಇದ್ದವೆಂದು ಇರುವ ಎಲ್ಲ ದೇವಾಲಯಗಳಿಗೂ ವೈಭವದ ಪೂಜೆ ನಡೆದು ಬಂದಿದ್ದು, ಈಗ ಕೆಲವು ಮಾತ್ರ ಕಾಣಸಿಗುತ್ತವೆ.ರಥ ಸಾಗುವ ತೇರು ಬೀದಿಯಲ್ಲಿ ಎದರು ಹನುಮಪ್ಪ, ಎಲ್ಲಮ್ಮ, ಬಸವಣ್ಣ, ಗಜಲಕ್ಷ್ಮಿ, ವಿರಭದ್ರೇಶ್ವರ, ನೀಲಕಂಠ, ವಿರೂಪಾಕ್ಷೇಶ್ವರ, ಮಹಿಸಾಸುರ ಮರ್ದಿನಿ, ಶಂಕರಲಿಂಗ ಸೇರಿದಂತೆ ಇತರ ದೇವಾಲಯಗಳು ಇವೆ.
ವಿಜಯನಗರ ಇತಿಹಾಸದೊಂದಿಗೆ ಶಿಲ್ಪಕಲಾ ಸಿರಿ ಸಂಪತ್ತು ಪಡೆದ ಕನಕಗಿರಿ ದಾಳಿಗೆ ತುತ್ತಾದರೂ ಇನ್ನೂ ಅಷ್ಟು ಉಳಿದೆ. ಉಳಿದ ಸಾಮ್ರಾಜ್ಯದ ಕುರುಹುಗಳನ್ನು ನಾವೆಲ್ಲ ರಕ್ಷಿಸಬೇಕಾಗಿದೆ ಮತ್ತು ಇದನ್ನು ಮುಂದಿನ ಜನಾಂಗಕ್ಕೆ ತೋರಿಸಲು ಉಳಿಸಬೇಕಾಗಿದೆ.
-ವಿವಿದ ಮೂಲಗಳಿಂದ
ಶ್ರೀಕನಕಾಚಲಪತಿ ದೇವಾಲಯ ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಸಂಪತ್ತಿನ ದೇವಾಲಯ.ವಿಜಯ ನಗರ ಅರಸರಲ್ಲೆ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾರ್ದದಲ್ಲಿ ನಿರ್ಮಾಣಗೊಂಡಿದ್ದು, ಕಲಾ ಸಿರಿಗೆ ಸಾಕ್ಷಿಯಾಗಿದೆ. ೨೦೮ ಅಡಿ ಉದ್ದ ಹಾಗೂ ೯೦ಅಡಿ ಅಗಲವಿರುವ ದೇವಾಲಯ ವಿಶಾಲವಾಗಿದೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಗೋಪುರಗಳು ಮತ್ತು ಅದರ ರಚನಾ ಕಲೆಯು ದೀರದಿಂದಲೆ ಪ್ರವಾಸಿಗರ ಮನಸೂರೆಗೊಳ್ಳುತ್ತದೆ.

ಶುಕ್ರವಾರ, ಫೆಬ್ರವರಿ 19, 2010

ಶುಕ್ರವಾರ, ಫೆಬ್ರವರಿ 12, 2010

ಕನಕಗಿರಿ ಉತ್ಸವ 2010 ಪೂರ್ವ ಸಿದ್ದತೆಗಳು



ಕೊಪ್ಪಳ ಫೆ. : ಇತಿಹಾಸ ಪ್ರಸಿದ್ಧವಾಗಿರುವ ಕನಕಗಿರಿ ಉತ್ಸವವನ್ನು ಫೆ. ೨೩ ಮತ್ತು ೨೩ ರಂದು ಎರಡು ದಿನಗಳ ಕಾಲ ವಿಜೃಂಭಣೆಂದ ನಡೆಸಲಾಗುವುದು ಎಂದು ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಕಲ್ಯಾಣಮಂಟಪದಲ್ಲಿ ಏರ್ಪಡಿಸಲಾಗಿದ್ದ ಕನಕಗಿರಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು.

ಇತಿಹಾಸ ಪ್ರಸಿದ್ಧವಾಗಿರುವ ಕನಕಗಿರಿಯಲ್ಲಿ "ಕನಕಗಿರಿ ಉತ್ಸವ" ನಡೆಸಲು ಸರ್ಕಾರ ಕಳೆದ ವರ್ಷವೇ ತೀರ್ಮಾನಿಸಿ, ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿತ್ತು. ಚುನಾವಣೆ ಮತ್ತು ಆನೆಗುಂದಿ ಸೇತುವೆ ದುರಂತದಿಂದಾಗಿ ಕೊನೆ ಘಳಿಗೆಯಲ್ಲಿ ಉತ್ಸವ ನಡೆಸುವುದನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾತು. ಈ ವರ್ಷ ಮತ್ತೆ ಕನಕಗಿರಿ ಉತ್ಸವ ನಡೆಸಲು ಈ ಭಾಗದ ಜನ ಉತ್ಸುಕರಾಗಿದ್ದು, ಅವರ ಕೋರಿಕೆಯನ್ನು ಮನ್ನಿಸಿ ಕನಕಗಿರಿ ಉತ್ಸವ ನಡೆಸಲು ರಾಜ್ಯ ಸರ್ಕಾರ ೦೧ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ ಸಲುವಾಗಿ ಕನಕಗಿರಿಯಲ್ಲಿ ಉತ್ಸವ ನಡೆಸುವುದು ಬಹು ಮಹತ್ವಪೂರ್ಣವಾಗಿದೆ. ಜಿಲ್ಲಾಡಳಿತ ಕೂಡ ಈ ದಿಸೆಯಲ್ಲಿ ಉತ್ಸವ ನಡೆಸಲು ಸನ್ನದ್ಧವಾಗಿದೆ. ಫೆ. ೨೨, ೨೩ ರಂದು ಎರಡು ದಿನಗಳ ಕಾಲ ಉತ್ಸವ ನಡೆಸಲು ಈಗಾಗಲೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಇಂದಿನಿಂದಲೇ ನಡೆಸಲು ಕಾರ್ಯೋನ್ಮುಖರಾಗಿದ್ದಾರೆ. ಸಮಯ ಬಹಳ ಕಡಿಮೆ ಇರುವುದರಿಂದ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ರಾಜ್ಯ ಮಟ್ಟದ ಕಲಾವಿದರ ಜೊತೆಗೆ ಸ್ಥಳೀಯ ಕಲಾವಿದರಿಗೂ ಉತ್ಸವದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು. ಫೆ. ೨೨ ರಂದು ಉತ್ಸವದ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗುವುದು. ಮುಖ್ಯಮಂತ್ರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದ್ದಾರೆ. ಉತ್ಸವದ ದಿನಾಂಕಗಳನ್ನು ಯಾವುದೇ ಕಾರಣಕ್ಕೂ ಮುಂದೂಡಲಾಗುವುದಿಲ್ಲ. ಮುಂದೆ ಗ್ರಾಮಪಂಚಾಯತಿ ಚುನಾವಣೆ ಬರುವ ಸಾಧ್ಯತೆ ಇರುವುದರಿಂದ ನಿಗದಿಪಡಿಸಿದ ದಿನಾಂಕದಲ್ಲಿಯೇ ಉತ್ಸವ ನಡೆಸಲು ಸರ್ವ ಜನರೂ ಸಹಕರಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.

ಕನಕಗಿರಿ ಉತ್ಸವವನ್ನು ಯಶಸ್ವಿಗೊಳಿಸಲು ೧೮ ಉಪಸಮಿತಿಗಳನ್ನು ರಚಿಸಲಾಗಿದೆ. ಮುಖ್ಯವಾಗಿ ಸ್ವಾಗತ, ಸಾಂಸ್ಕೃತಿಕ, ವೇದಿಕೆ ನಿರ್ಮಾಣ, ಆಹಾರ, ಕ್ರೀಡೆ, ವಸತಿ, ಸಾರಿಗೆ, ಮೆರವಣಿಗೆ, ಆರೋಗ್ಯ, ಭದ್ರತೆ, ಪ್ರಚಾರ, ಮೂಲಭೂತ ಸೌಕರ್ಯ, ಕುಡಿಯುವ ನೀರು, ನೈರ್ಮಲೀಕರಣ, ವಸ್ತುಪ್ರದರ್ಶನ ಮತ್ತು ಸ್ತಬ್ಧ ಚಿತ್ರ, ಹಣಕಾಸು ಮತ್ತು ಲೆಕ್ಕಪತ್ರ, ಹಾಗೂ ಸಂಘಟನಾ ಸಮಿತಿಗಳನ್ನು ರಚಿಸಿ, ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಮತ್ತು ಸದಸ್ಯರುಗಳನ್ನು ನೇಮಿಸಲಾಗಿದೆ. ಪ್ರತಿಯೊಂದು ಉಪಸಮಿತಿಯು ಸಭೆ ಸೇರಿ, ಉತ್ಸವದ ಯಶಸ್ವಿಗೆ ತೆಗೆದುಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿ, ಸಭೆಯ ವಿವರಗಳ ನಡವಳಿಗಳನ್ನು ಕೂಡಲೆ ಸಲ್ಲಿಸಬೇಕು. ಉತ್ಸವದ ವೇದಿಕೆ ಹಾಗೂ ಊರಿನಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯಾ ಸಮಿತಿಯವರು ಕೂಡಲೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉತ್ಸವ ನಡೆಸಲು ಕೃ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವರಾಜ್ ತಂಗಡಗಿ ಅವರು ಎಲ್ಲ ವ್ಯವಸ್ಥೆಗಳನ್ನು ಈಗಾಗಲೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಅವರ ಜೊತೆಗೆ ನಿಂತು ಸಹಕರಿಸಿ ಉತ್ಸವದ ಯಶಸ್ವಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಸಂಸದ ಶಿವರಾಮಗೌಡ ಅವರು ಮನವಿ ಮಾಡಿಕೊಂಡರು.ಉತ್ಸವ ನಡೆಸಲು ಕಾಲಾವಧಿ ಕಡಿಮೆ ಇರುವುದರಿಂದ ಕನಕಗಿರಿಯ ರಹವಾಸಿಗಳು ತಮ್ಮ ಮನೆಯ ಮುಂದೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ಗ್ರಾಮ ಸ್ವಚ್ಛ ಮಾಡಿದಂತಾಗುತ್ತದೆ. ಅಧಿಕಾರಿಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಅವರ ಜೊತೆಗೆ ತಾವೂ ಸಹಕರಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಟನಿ ಮೆಂಡೋನ್ಸ ಅವರು ಹೇಳಿದರು.ಸಭೆಯಲ್ಲಿ ಜಿ.ಪಂ. ಸದಸ್ಯೆ ಸವಿತಾ ಕಲುಬಾಗಿಲ ಮಠ, ಗ್ರಾ.ಪಂ. ಅಧ್ಯಕ್ಷ ದೇವಪ್ಪ ತೋಳದ, ಉಪಾಧ್ಯಕ್ಷೆ ಹೊನ್ನಮ್ಮ ನಾಯಕ್, ಅಪರ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್, ಸಹಾಯಕ ಆಯುಕ್ತ ಜಿ.ಕೆ. ನಾಗೇಂದ್ರಪ್ಪ, ಅಲ್ಲದೆ ಊರಿನ ಹಿರಿಯರು, ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕನಕಗಿರಿ ಐತಿಹಾಸಿಕ ಪುರಾಣ ಪ್ರಸಿದ್ದ ಊರು

ಕನಕಗಿರಿ

ಕನಕಗಿರಿ ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ದ ಸ್ಥಳ . ಗಂಗಾವತಿ ನಗರದಿಂದ 13 ಕಿಮಿ ದೂರದಲ್ಲಿರುವ ಐತಿಹಾಸಿಕ , ಧಾರ್ಮಿಕ ಸ್ಥಳ ಇದಾಗಿದೆ. ಇದರ ಹಿಂದಿನ ಹೆಸರು ಸ್ವರ್ಣಗಿರಿ ಎಂದಾಗಿತ್ತು. ಒಂದು ಕಾಲದಲ್ಲಿ ಮೌರ್ಯರ ರಾಜಧಾನಿಯಾಗಿತ್ತು ಎನ್ನಲಾಗುತ್ತದೆ. ಕನಕ ಮುನಿಯು ಇಲ್ಲಿ ತಪಗೈದ ಎಂಬ ಪ್ರತೀತಿ ಇದೆ. ಇಲ್ಲಿ ಆಳ್ವಿಕೆ ಮಾಡಿದ ನಾಯಕರು ಇಲ್ಲಿ ಹಲವಾರು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ.ಅವುಗಳಲ್ಲಿ ಪ್ರಮುಖವಾದದು ಕನಕಾಚಲಪತಿ ದೇವಸ್ಥಾನ. ಅತೀ ದೊಡ್ಡದಾದ ಮತ್ತು ಆಕರ್ಷಣಿಯವಾದ ದೇವಾಲಯ ಇದಾಗಿದೆ.ದಕ್ಷಿಣ ಭಾರತದ ವಾಸ್ತು ಶಿಲ್ಪವನ್ನು ಇಲ್ಲಿ ಕಾಣಬಹುದಾಗಿದೆ. ವಿಜಯನಗರದ ಅರಸರ ಕಾಲದ ಶಿಲ್ಪಕಲೆಯನ್ನು ಇಲ್ಲಿ ಕಾಣಬಹುದಾಗಿದೆ.

ಕಣ್ಣಿದ್ದವರು ಕನಕಗಿರಿ ನೋಡಬೇಕು -ಕಾಲಿದ್ದವರು ಹಂಪೆ ನೋಡಬೇಕು ಎಂಬ ಪ್ರತೀತಿ ಇದೆ.

ಇಲ್ಲಿಯ ಕನಕಾಚಲಪತಿಯ ಜಾತ್ರೆಯು ಪ್ರಸಿದ್ದವಾಗಿದ್ದು ,ಲಕ್ಷಾಂತರ ಜನರನ್ನು ಸೆಳೆಯುತ್ತಿದೆ.