WEL COME TO KANAKAGIRI UTSAV 2013

ಶುಕ್ರವಾರ, ಫೆಬ್ರವರಿ 1, 2013

ಐತಿಹಾಸಿಕ ಕನಕಗಿರಿ ಉತ್ಸವ ಚಾಲನೆಗೆ ಕ್ಷಣಗಣನೆ


ಕೊಪ್ಪಳ ಫೆ.
ಐತಿಹಾಸಿಕ ಕನಕಗಿರಿ ಉತ್ಸವ ಪ್ರಾರಂಭಕ್ಕೆ ಇದೀಗ ಕ್ಷಣಗಣನೆ ಪ್ರಾರಂಭವಾಗಿದ್ದು, ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ವೈಭವೋಪೇತ ಉತ್ಸವಕ್ಕೆ ಇಡೀ ಕನಕಗಿರಿ ನವ ವಧುವಿನಿಂತೆ ಶೃಂಗಾರಗೊಂಡಿದೆ. ಈಗಾಗಲೆ ಮುಖ್ಯ ವೇದಿಕೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ವೇದಿಕೆಗೆ 'ಕನಕರಾಯ ವೇದಿಕೆ' ಎಂಬುದಾಗಿ ಘೋಷಣೆ ಮಾಡಲಾಗಿದೆ. ಉತ್ಸವದ ಪ್ರಮುಖ ವೇದಿಕೆ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವಂತೆ ಸಿದ್ಧಪಡಿಸಲಾಗಿದೆ. ಕನಕಗಿರಿ ಉತ್ಸವಕ್ಕೆ ಇಡೀ ಕನಕಗಿರಿ ಗ್ರಾಮ ಸಿದ್ಧಗೊಂಡಿದ್ದು, ಕನಕಗಿರಿಯ ಪ್ರಮುಖ ರಸ್ತೆಗಳು ಡಾಂಬರೀಕರಣಗೊಂಡು ಸಜ್ಜಾಗಿವೆ. ಕನಕಗಿರಿಯ ರಸ್ತೆಗಳ ಇಕ್ಕೆಲಗಳು ಸ್ವಚ್ಛಗೊಂಡಿದ್ದು, ಸಾರ್ವಜನಿಕರು ಉತ್ಸವದ ರಸದೌತಣ ಸವಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಮಾಧ್ಯಮದವರು ಉತ್ಸವದ ಕ್ಷಣ ಕ್ಷಣದ ಸುದ್ದಿಗಳನ್ನು ರವಾನಿಸಲು ಅನುಕೂಲವಾಗುವಂತೆ ವೇದಿಕೆಯ ಪಕ್ಕದಲ್ಲೇ ಸುಸಜ್ಜಿತ ಮಾಧ್ಯಮ ಕೇಂದ್ರ ಸಿದ್ಧವಾಗಿದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನಕಗಿರಿಯ ನಾಯಕರ ಗತವೈಭವವನ್ನು ಮರುಕಳಿಸುವಂತೆ ಮಾಡುವುದು, ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಸುವ ಉದ್ದೇಶದಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ೨೦೧೦ ರಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ನಂತರ ರಾಜ್ಯದಲ್ಲಿ ಆವರಿಸಿದ ಬರದ ಕಾರಣಕ್ಕಾಗಿ ಉತ್ಸವವನ್ನು ರದ್ದುಪಡಿಸಲಾಗಿತ್ತು. ಆದರೆ ಇದೀಗ ಸರ್ಕಾರ ಈ ಬಾರಿ ಕನಕಗಿರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅನುದಾನವನ್ನೂ ಸಹ ಬಿಡುಗಡೆ ಮಾಡಿದೆ. ಉತ್ಸವದ ಯಶಸ್ವಿಗೆ ಸ್ಥಳೀಯರು, ಸಾರ್ವಜನಿಕರು ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು ಎನ್ನುತ್ತಾರೆ ಕನಕಗಿರಿ ಶಾಸಕ ಶಿವರಾಜ ತಂಗಡಗಿಯವರು.

ಗುರುವಾರ, ಜನವರಿ 31, 2013

ಕೆಲವು ಅಪರೂಪದ ಚಿತ್ರಗಳು


ಕೃಪೆ : ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಕನಕಗಿರಿಯ ಐತಿಹಾಸಿಕ ಪಕ್ಷಿನೋಟ 4


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ 3


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ -1


ಕನಕಗಿರಿಯ ಐತಿಹಾಸಿಕ ಪಕ್ಷಿನೋಟ


ಡಾ.ದುರುಗಪ್ಪ ಎಂ.ಕೆ. ಇತಿಹಾಸ ಉಪನ್ಯಾಸಕರು ಕನಕಗಿರಿ

ಉತ್ಸವದಲ್ಲಿ ಗಂಗಾವತಿ ಪ್ರಾಣೇಶ್, ಹಂಸಲೇಖ, ರಾಜೇಶ್‌ಕೃಷ್ಣನ್


ಕನಕಗಿರಿ ಉತ್ಸವ ಅಂಗವಾಗಿ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಖ್ಯಾತ ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಹಂಸಲೇಖ, ಗಂಗಾವತಿಯ ಪ್ರಾಣೇಶ್ ಮುಂತಾದ ಖ್ಯಾತ ಕಲಾವಿದರಿಂದ ವಿವಿಧ ಸಂಗೀತ, ನೃತ್ಯ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ. ೦೨ ರಂದು ಸಂಜೆ ೫.೩೦ ಕ್ಕೆ ಕನಕಗಿರಿಯ ಡಿ.ಮಾರುತಿ ಬಿನ್ನಾಳ ಇವರಿಂದ ಹಿಂದೂಸ್ತಾನಿ ಸಂಗೀತ, ಗಂಗಾವತಿಯ ಸುನೀತ ರಾಮಕೃಷ್ಣ ಇವರಿಂದ ಜಾನಪದ ಸಂಗೀತ ಹಾಗೂ ಕನಕಗಿರಿಯ ಕಿರಣ್ ಬೊಂದಡೆ ಇವರಿಂದ ತಬಲಾ ಜರುಗಲಿದೆ. ಸಂಜೆ ೦೬ ರಿಂದ ೭-೩೦ ರವರೆಗೆ ಉತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಅಂದು ರಾತ್ರಿ ೭.೩೦ ರಿಂದ ೯.೦೦ ರವರೆಗೆ ಬೆಂಗಳೂರಿನ ಪ್ರಭಾತ್ ಕಲಾವಿದ ರಿಂದ ಧರ್ಮಭೂಮಿ ನೃತ್ಯ ರೂಪಕ, ನಂತರ ಬೆಂಗಳೂರಿನ ರಾಜೇಶ ಕೃಷ್ಣನ್ ಮತ್ತು ತಂಡದಿಂದ ಚಲನಚಿತ್ರಗೀತೆಗಳು, ಕೊಪ್ಪಳದ ಶಂಕ್ರಪ್ಪ ಮೋರನಾಳ ಇವರಿಂದ ಬಯಲಾಟ, ಕನಕಗಿರಿಯ ಮಲ್ಕೇಶ್ ಕೋಟೆ ಮತ್ತು ತಂಡದಿಂದ ನಾಟಕ-ರಾಜಾ ಉಡಚಪ್ಪ ನಾಯಕ ಪ್ರದರ್ಶನಗೊಳ್ಳಲಿದೆ. ಫೆ. ೦೩ ರಂದು ಸಂಜೆ ೫.೦೦ ಗಂಟೆಗೆ ಕನಕಗಿರಿಯ ಛತ್ರಪ್ಪ ತಂಬೂರಿ ಇವರಿಂದ ವಚನ ಗಾಯನ, ಗಂಗಾವತಿಯ ವೀರೇಶ ಕುಮಾರ್ ಆರ್. ಭಜಂತ್ರಿ ಇವರಿಂದ ತಬಲಾ ವಾದನ, ಯಲಬುರ್ಗಾದ ಜೀವನಸಾಬ ವಾಲಿಕಾರ ಬಿನ್ನಾಳ ಇವರಿಂದ ಲಾವಣಿ, ಕನಕಗಿರಿಯ ಕನಕಗೌಡ ಪೊಲೀಸ್ ಪಾಟೀಲ್ ಇವರಿಂದ ತತ್ವಪದ, ಗಂಗಾವತಿಯ ಕಾಳಿದಾಸ ಜಾನಪದ ಕಲಾ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಬಸಪ್ಪ ಚೌಡಕಿ ಇವರಿಂದ ಚೌಡಕಿ ಪದ, ಗಂಗಾವತಿಯ ಮಹಾಬಳೇಶ್ವರ ಲಕ್ಷ್ಮಣಗೌಡ ಇವರಿಂದ ಜಾನಪದ ಗೀತೆ, ಗಂಗಾವತಿಯ ಮಹಮ್ಮದ್ ಹುಸೇನ್ ಬಿ.ಕೇಸರಟ್ಟಿ ಇವರಿಂದ ರಂಗಗೀತೆ, ಕುಷ್ಟಗಿಯ ಶರಣಪ್ಪ ವಡಿಗೇರಿ ಹಾಗೂ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಎಸ್.ಎಸ್. ಹಿರೇಮಠ ಇವರಿಂದ ತಬಲಾ ಹಾಗೂ ಕನಕಗಿರಿಯ ಶಂಕರ ಬಿನ್ನಾಳ ಇವರಿಂದ ಹಾರ್ಮೋನಿಯಂ ಜುಗಲ್‌ಬಂದಿ, ಭೂಮಿಕಾ, ಪ್ರತಿಭಾ ಹೆಚ್.ಎಂ.ಐಶ್ವರ್ಯ ಇವರಿಂದ ಭರತನಾಟ್ಯ, ಗಂಗಾವತಿಯ ಪ್ರಾಣೇಶ ಇವರಿಂದ ಹಾಸ್ಯ ಸಂಜೆ, ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ತಂಡದಿಂದ ರಾಜಾ ಉಡಚಪ್ಪ ನಾಯಕ-ನೃತ್ಯ ರೂಪಕ, ಬೆಂಗಳೂರಿನ ಹಂಸಲೇಖ ಮತ್ತು ತಂಡದಿಂದ ಸಿನಿಮಾ ಲಾಹಿರಿ, ಕೊಪ್ಪಳ ಶಿಕ್ಷಕರ ಕಲಾವೃಂದದಿಂದ ಸಂಗೊಳ್ಳಿ ರಾಯಣ್ಣ ನಾಟಕ, ಗಂಗಾವತಿಯ ಹೆಜ್ಜೆ ಗೆಜ್ಜೆ ಜಾನಪದ ಕಲಾ ಸಾಂಸ್ಕೃತಿಕ ಗ್ರಾಮೀಣಾಭಿವೃದ್ದಿ ಸಂಘ ಇವರಿಂದ ರಕ್ತ ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.