WEL COME TO KANAKAGIRI UTSAV 2013

ಸೋಮವಾರ, ಜನವರಿ 28, 2013

ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನ


ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕನಕಗಿರಿ ಉತ್ಸವವನ್ನು ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕುಸ್ತಿ, ವಾಲಿಬಾಲ್, ಕಬಡ್ಡಿ, ಮಲ್ಲಕಂಬ, ರಂಗೋಲಿ ಸೇರಿದಂತೆ ಹಲವು ಮುಕ್ತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದ್ದು, ೫೨, ೫೭, ೬೨, ೬೮, ೭೪ ಕೆ.ಜಿ. ವಿಭಾಗ ಮತ್ತು ೭೫ ಕೆ.ಜಿ. ಮೇಲ್ಪಟ್ಟ ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನಗಳನ್ನು ನೀಡಲಾಗುವುದು. ೭೫ ಕೆ.ಜಿ. ಮೇಲ್ಪಟ್ಟಿ ವಿಭಾಗದಲ್ಲಿ ವಿಜೇತರಾದವರಿಗೆ ಬೆಳ್ಳಿಗಧೆ ಮತ್ತು ಕನಕಗಿರಿ ಕೇಸರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಪ್ರಥಮ ಸ್ಥಾನ ಪಡೆದವರಿಗೆ ೨೫೦೦೦ ರೂ., ದ್ವಿತೀಯ- ರೂ. ೨೦೦೦೦, ತೃತೀಯ- ರೂ. ೧೫೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ೧೨೦೦೦ ರೂ. ಬಹುಮಾನ ನೀಡಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆ ಇದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೫೦೦೦ ರೂ., ದ್ವಿತೀಯ- ರೂ. ೨೦೦೦೦, ತೃತೀಯ- ರೂ. ೧೫೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ೧೨೦೦೦ ರೂ. ಬಹುಮಾನ ವಿತರಿಸಲಾಗುವುದು. ಪುರುಷರು ಮತ್ತು ಮಹಿಳಯರಿಗೆ ಮಲ್ಲಕಂಭ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸುವ ಪ್ರತಿ ೧೦ ತಂಡಗಳಿಗೆ ತಲಾ ೫೦೦೦ ರೂ.ಗಳ ಬಹುಮಾನ ನೀಡಲಾಗುವುದು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ- ೪೦೦೦, ದ್ವಿತೀಯ- ೩೦೦೦, ತೃತೀಯ- ೨೦೦೦ ಹಾಗೂ ಚತುರ್ಥ ಸ್ಥಾನ ಪಡೆದವರಿಗೆ ರೂ. ೧೦೦೦ ಗಳ ಬಹುಮಾನ ನೀಡಲಾಗುವುದು. ಕ್ರೀಡಾಕೂಟಗಳು ಫೆ. ೨ ಮತ್ತು ೩ ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಅಲ್ಲದೆ ಸ್ಪರ್ಧಾಳುಗಳಿಗೆ ಊಟೋಪಹಾರದ ವ್ಯವಸ್ಥೆ ಇರುತ್ತದೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಫೆ. ೨ ರಂದು ಬೆಳಿಗ್ಗೆ ೭-೩೦ ಗಂಟೆಗೆ ಸರಿಯಾಗಿ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನ ಕ್ರೀಡಾ ಸಮಿತಿಯಲ್ಲಿ ವರದಿ ಮಾಡಿಕೊಳ್ಳಬೇಕು. ಕುಸ್ತಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಫೆ. ೨ ರಂದು ಬೆಳಿಗ್ಗೆ ೯ ಗಂಟೆಯಿಂದ ೧೧ ಗಂಟೆಯೊಳಗಾಗಿ ತಮ್ಮ ತೂಕವನ್ನು ನೋಂದಾಯಿಸಿಕೊಳ್ಳಬೇಕು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳು ಜ. ೩೧ ರ ಒಳಗಾಗಿ ತಮ್ಮ ತಂಡದ ಹೆಸರನ್ನು ಕನಕಗಿರಿ ಸರ್ಕಾರಿ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕ ಶಾಮೀದ ಪಾಷಾ, ಮೊಬೈಲ್- ೯೪೮೧೪೪೦೬೮೩ ಅಥವಾ ತಿಪ್ಪೇಸ್ವಾಮಿ- ೯೦೦೮೩೬೩೬೭೦ ಅಥವಾ ಕೊಪ್ಪಳ ಕಾರ್ಯಾಲಯ- ೦೮೫೩೯-೨೦೧೪೦೦ ಇವರಲ್ಲಿ ನೋಂದಾಯಿಸಕೊಳ್ಳಬಹುದಾಗಿದೆ ಎಂದು ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷರೂ ಆಗಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಲಾಸ್ ಘಾಡಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ