WEL COME TO KANAKAGIRI UTSAV 2013

ಗುರುವಾರ, ಜನವರಿ 31, 2013

ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ


: ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ ಫೆ.೦೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಶ್ರೀ ಕನಕರಾಯ ವೇದಿಕೆಯವರೆಗೆ ಸಾಗಿ ಬರಲಿದೆ. ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ಅವರು ನೆರವೇರಿಸುವರು. ಜಾನಪದ ಕಲಾವಾಹಿನಿ ಭಾಗವಹಿಸುವ ಕಲಾ ತಂಡಗಳ ವಿವರ ಇಂತಿದೆ. ಕೊಪ್ಪಳದ ಪ್ಯಾಟಿ ಬಸವೇಶ್ವರ ಜಾನಪದ ಕಲಾ ಸಂಘ ಇವರಿಂದ ಕರಡಿ ಮಜಲು, ಯಲಬುರ್ಗಾದ ಬೀರಲಿಂಗೇಶ್ವರ ಜನಪದ ಕಲಾ ಸಂಘದಿಂದ ಡೊಳ್ಳು ಕುಣಿತ, ಯಲಬುರ್ಗಾದ ಮಾರುತೇಶ್ವರ ಷಹನಾಹಿ ಕಲಾಮೇಳ ಇವರಿಂದ ಹಲಿಗೆ ಮಜಲು, ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ದುರ್ಗಾದೇವಿ ಹಗಲು ವೇಷ ಕಲಾ ಸಂಘದಿಂದ ಹಗಲು ವೇಷ, ಕುಷ್ಟಗಿಯ ದೇವಪ್ಪ ಭಜಂತ್ರಿ ಮತ್ತು ತಂಡದಿಂದ ಕಣಿಹಲಗೆ ವಾದನ, ಕೊಪ್ಪಳದ ಶಿವಮೂರ್ತಿ ಮೇಟಿ ಹಾಗೂ ತಂಡದಿಂದ ಕೋಲಾಟ ತಂಡ, ಬಳ್ಳಾರಿಯ ಹನುಮಂತಪ್ಪ ಹಂಪಾಪಟ್ಟಣ ಇವರಿಂದ ಕೀಲು ಕುದುರೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ಚಿತ್ರದುರ್ಗದ ಮೆಹಬೂಬ ಸುಬಾನ್ ಮತ್ತು ತಂಡದಿಂದ ಗಾರುಡಿ ಗೊಂಬೆ, ಮಂಡ್ಯದ ಕೆ.ಬಿ.ಸ್ವಾಮಿ ಮತ್ತು ತಂಡದಿಂದ ನಂದಿ ಧ್ವಜ, ಧಾರವಾಡದ ಶಿವಾನಂದ ಆರ್.ಮೇಲಿನಮನಿ ಮತ್ತು ತಂಡದಿಂದ ಜಗ್ಗಲಿಗೆ ಮೇಳ, ಮಂಡ್ಯದ ಲೋಕೇಶ ಮತ್ತು ತಂಡದಿಂದ ಪೂಜಾ ಕುಣಿತ ಒಳಗೊಂಡ ಜಾನಪದ ತಂಡಗಳು ಜಾನಪದ ಕಲಾ ವಾಹಿನಿಗೆ ಮೆರಗು ತುಂಬಲಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ